ಭಟ್ಕಳ, ಡಿಸೆಂಬರ್ ೨೧:ಮನೆಯಿಂದ ಶಾಲೆಗೆ ಹೋಗುತ್ತೇನೆಂದು ಹೋದ ಭಟ್ಕಳದ ಮೂವರು ವಿದ್ಯಾರ್ಥಿಗಳು ಅತ್ತ ಶಾಲೆಗೆ ಹೋಗದೆ ಇತ್ತ ಮನೆಗೂ ಬಾರದೆ ಕಣ್ಮರೆಯಾಗಿದ್ದಾರೆಂದು ವಿದ್ಯಾರ್ಥಿಗಳ ಪಾಲಕರು ನಗರ ಪೋಲಿಸ್ ಠಾಣೆಯಲ್ಲಿ ದೂರಿದ್ದಾರೆ.
ಕಣ್ಮರೆಯಾದ ವಿದಾರ್ಥಿಗಳನ್ನು ಇಲ್ಲಿನ ಹೆಬಳೆ ಗ್ರಾ.ಪಂ ವ್ಯಾಪ್ತಿಯ ಹನೀಫಾದ್ ನ ಮುಹಮ್ಮದ್ ಫೈಝಾನ್ (14) ಈತನು ಇಲ್ಲಿನ ನವಾಯತ್ ಕಾಲೋನಿಯ ಅಂಜುಮನ್ ಪ್ರೌಡಶಾಲೆಯಲ್ಲಿ 9 ನೆ ತರಗತಿಯಲ್ಲಿ ಕಲಿಯುತ್ತಿದ್ದು ಶನಿವಾರ ಬೆಳಿಗ್ಗೆ ಶಾಲೆಗೆ ಹೋದವನು ಇದುವರಗೂ ಮನೆಗೆ ಬಂದಿಲ್ಲ ಎನ್ನಲಾಗಿದೆ ಅದೇ ರೀತಿ ಮುಗ್ದುಮ್ ಕಾಲೋನಿಯ ಮುಹಮ್ಮದ್ ಯಾಸಿನ್ ಮುಕ್ರಿ, ಹಾಗೂ ಅಬ್ದುಲ್ ಅಝೀಮ್ ಸಾದಾ, ಇವರು ಕಂಡ್ಲೂರಿನ ಮದರಸಾದಲ್ಲಿ ಅದ್ಯಯನ ಮಾಡುತ್ತಿದ್ದರು ಎನ್ನಲಾಗಿದ್ದು ಶುಕ್ರವಾರದಂದು ಅಲ್ಲಿಂದ ಬಂದವರು ಮತ್ತೆ ಮರಳಿ ಶನಿವಾರ ಮದರಸಾ ಕ್ಕೆ ಹೋಗುತ್ತೇನೆಂದು ಹೇಳಿ ಅಲ್ಲಿಗೂ ಹೋಗದೆ ಎಲ್ಲಿಯೋ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.